ಪ್ರಶ್ನೆ
|
ಉತ್ತರ
|
| ಚಿನ್ಮಯಜ್ಙಾನಿ ಬಿರುದು ಪಡೆದವರು ಯಾರು? |
ಚನ್ನಬಸವಣ್ಣ |
| ಬಸವಣ್ಣನವರ ಮಾವನವರ ಹೆಸರು? |
ಬಲದೇವರಸ |
| ಬಸವಣ್ಣನವರ ಯಾವ ರಾಜನ ಮಂತ್ರಿಯಾಗಿದ್ದರು? |
ಬಿಜ್ಜಳ |
| ಬಸವಣ್ಣನವರಿಗೆ ಏನು ಶಿಕ್ಷೆ ವಿಧಿಸಲಾಯಿತು? |
ಗಡಿಪಾರು ಶಿಕ್ಷೆ |
| ಬಸವಣ್ಣನವರು ಪ್ರತಿಪಾದಿಸಿದ ಸಿದ್ಧಾಂತ ಯಾವುದು? |
ಶಕ್ತಿವಿಶಿಷ್ಟಾದ್ವೈತ |
| ಬಸವಣ್ಣನವರ ಮಗನ ಹೆಸರು? |
ಬಾಲಸಂಗಯ್ಯ |
| ಸಿದ್ಧಾಂತಗಳು ಎಷ್ಟು ಪ್ರಕಾರ |
4 (4) |
| ಸಿದ್ಧಾಂತಗಳು ಯಾವವು? |
ದ್ವೈತ, ಅದ್ವೈತ, ವಿಶಿಷ್ಟಾದ್ವೈತ , ಶಕ್ತಿವಿಶಿಷ್ಟಾದ್ವೈತ |
| ವಚನಭಂಡಾರಿ ಯಾರು? |
ಶಾಂತರಸ |
| ಹಡಪದ ಅಪ್ಪಣ್ಣನ ವಚನಾಂಕಿತ ಯಾವುದು? |
ಬಸವಪ್ರಿಯ ಕೂಡಲ ಚನ್ನಸಂಗ |
| ಶರಣೆಯಾಗಿ ಮಾರ್ಪಟ್ಟ ವೇಶ್ಯ ಯಾರು? |
(ಸೂಳೆ)ಸಂಕವ್ವೆ |
| ಸೂಳೆಸಂಕವ್ವೆ ವಚನಾಂಕಿತ ಯಾವುದು? |
ನಿರ್ಲಜ್ಜೇಶ್ವರ |
| ಹಡಪದ ಅಪ್ಪಣ್ಣನ ಪತ್ನಿಯ ಹೆಸರು? |
ಲಿಂಗಮ್ಮ |
| ಮುಕ್ತಾಯಕ್ಕನ ವಚನಾಂಕಿತ ಯಾವುದು? |
ಅಜಗಣ್ಣ |
| ಮೋಳಿಗೆ ಮಾರಯ್ಯನ ಧರ್ಮಪತ್ನಿ ಯಾರು? |
ಮಹಾದೇವಿ |
| ಆಯ್ದಕ್ಕಿ ಮಾರಯ್ಯನ ಧರ್ಮಪತ್ನಿ ಯಾರು? |
ಲಕ್ಕಮ್ಮ |
| ಅನುಭವ ಮಂಟಪದಲ್ಲಿ ಪ್ರಸಾದ ಸಿದ್ಧಪಡಿಸುತ್ತಿದ್ದವರು ಯಾರು? |
ಪಾಕದ ಭೀಮಣ್ಣ |
| ಅಮರೇಶ್ವರಲಿಂಗ ಯಾರ ವಚನಾಂಕಿತ |
ಆಯ್ದಕ್ಕಿ ಮಾರಯ್ಯ |
| ಅಂಬಿಗರ ಚೌಡಯ್ಯ ಯಾರ ವಚನಾಂಕಿತ |
ಅಂಬಿಗರ ಚೌಡಯ್ಯ |
| ಉರಿಲಿಂಗಪೆದ್ದಿಗಳ ವಚನಾಂಕಿತ ಯಾವುದು? |
ಉರಿಲಿಂಗಪೆದ್ದಿಪ್ರಿಯ ವಿಶ್ವೇಶ್ವರ |
| ಬಸವಣ್ಣನವರ ಆಪ್ತ ಸಹಾಯಕ ಯಾರು? |
ಹಡಪದ ಅಪ್ಪಣ್ಣ |
| ಕಾಮ ಭೀಮ ಜೀವನದೊಡೆಯ ಯಾರ ವಚನಾಂಕಿತ |
ಒಕ್ಕಲಿಗ ಮುದ್ದಣ್ಣ |
| ರಾಮನಾಥ ಯಾರ ವಚನಾಂಕಿತ |
ಜೇಡರ ದಾಸಿಮಯ್ಯ (ದೇವರ ದಾಸಿಮಯ್ಯ) |
| ಶರಣೆಯಾದ ರಾಜನರ್ತಕಿ ಯಾರು? |
ಮಾಯಾದೇವಿ |
| ಸ್ಥಾವರಕ್ಕಳಿವುಂಟು, ಜಂಗಮಕ್ಕಳಿವಿಲ್ಲ ಇದು ಯಾರ ವಚನದ ಭಾಗ |
ಬಸವಣ್ಣ |
| ಬಸವಣ್ಣನವರ ಅಕ್ಕನ ಹೆಸರು? |
ಅಕ್ಕನಾಗಮ್ಮ |
| ಬಸವಣ್ಣನವರ ಶಿಕ್ಷಾ ಗುರು ಯಾರು? |
ಜಾತವೇದ ಮುನಿ |
| ತೋಂಟದ ಸಿದ್ಧಲಿಂಗ ಶಿವಯೋಗಿಗಳ ವಚನಾಂಕಿತ ಯಾವುದು? |
ಮಹಾಲಿಂಗ ಗುರು ಶಿವ ಸಿದ್ಧೇಶ್ವರ ಪ್ರಭು |
| ಅಖಂಡೇಶ್ವರ ಯಾರ ವಚನಾಂಕಿತ |
ಷಣ್ಮುಖ ಶಿವಯೋಗಿಗಳು |
| ಸಿದ್ಧರಾಮೇಶ್ವರರ ಪೂರ್ವಾಶ್ರಮದ ಹೆಸರು? |
ಧೂಳಿಮಹಾಂಕಾಳಯ್ಯ |
| ಯೋಗಿನಾಥ ಯಾರ ವಚನಾಂಕಿತ |
ಸಿದ್ಧರಾಮೇಶ್ವರರ |
| ಅಕ್ಕಮಹಾದೇವಿ ದೀಕ್ಷಾ ಗುರು ಯಾರು? |
ಗುರುಲಿಂಗಸ್ವಾಮಿ |
| ಸಿದ್ಧರಾಮೇಶ್ವರರ ದೀಕ್ಷಾ ಗುರು ಯಾರು? |
ಚನ್ನಬಸವಣ್ಣ |
| ಅಕ್ಕನಾಗಮ್ಮನವರ ದೀಕ್ಷಾ ಗುರು ಯಾರು? |
ಬಸವಣ್ಣ |
| ಬಸವಪುರಾಣಮು ಬರೆದವರಾರು? |
ಪಾಲ್ಕುರಿಕೆ ಸೋಮನಾಥ |
| ಬಸವ ಪುರಾಣ ಬರೆದವರಾರು? |
ಭೀಮ ಕವಿ |
| ಬಸವಣ್ಣನವರ ಕುರಿತಾದ ಹರಿಹರನ ಕೃತಿ ಯಾವುದು? |
ಬಸವರಾಜದೇವರ ರಗಳೆ |
| ಸಂಸತ ಭವನದ ಮುಂದೆ ಬಸವಣ್ಣನವರ ಪುತ್ಥಳಿ ಸ್ಥಾಪಿತ ವರ್ಷ ಯಾವುದು? |
2003 (2003) |
| ಸಂಸತ ಭವನದ ಮುಂದೆ ಬಸವಣ್ಣನವರ ಪುತ್ಥಳಿ ಅನಾವರಣ ಮಾಡಿದವರು ಯಾರು? |
ರಾಷ್ಟ್ರಪತಿ ಎ.ಪಿ.ಜೆ. ಅಬ್ದುಲ್ ಕಲಾಂ |
| ಅಷ್ಟವಿಧಾರ್ಚನೆ ಎಂದರೇನು? |
ಜಲ, ಗಂಧ, ಅಕ್ಷತೆ, ಪತ್ರ-ಪುಷ್ಪ, ಧೂಪ, ದೀಪ, ನೈವೇದ್ಯ, ತಾಂಬೂಲ |
| ಅಷ್ಟಾಂಗ ಯೋಗಗಳು ಯಾವುವು? |
ಯಮ, ನಿಯಮ, ಆಸನ, ಪ್ರಾಣಾಯಾಮ, ಪ್ರತ್ಯಾಹಾರ, ಧ್ಯಾನ, ಧಾರಣ, ಸಮಾಧಿ |
| ಆದಿ ಅಕ್ಷರ ಯಾವುದು? |
ಓಂ |
| ಓಂಕಾರ ಸ್ವರೂಪಿ ಯಾರು? |
ಪರಾತ್ಪರ ಪರವಸ್ತು (ಪರಶಿವ) |
| ಓಂ ಅಕ್ಷರದಲ್ಲಿರುವ ಅಡಕಗಳು ಯಾವುವು? |
ಅ, ಉ, ಮ |
| ಷಟ್ ಚಕ್ರಗಳು ಯವುವು? |
ಆಧಾರ, ಸ್ವಾಧಿಷ್ಟಾನ, ಮಣಿಪೂರಕ, ಅನಾಹತ, ವಿಶುದ್ಧಿ, ಆಗ್ನೇಯ |
| ಪ್ರಭುಲಿಂಗ ಲೀಲೆ ಬರೆದವರಾರು? |
ಚಾಮರಸ |
| ವಚನ ಪಿತಾಮಹ ಯಾರು? |
ಫ.ಗು. ಹಳಕಟ್ಟಿ |
| ಫ.ಗು. ಹಳಕಟ್ಟಿ ಪೂರ್ಣ (ಪೂರ್ತಿ) ಹೆಸರೇನು? |
ಫಕೀರಪ್ಪ ಗುಂಡಪ್ಪ ಹಳಕಟ್ಟಿ |
| ಸಪ್ತಧಾತುಗಳು ಯಾವುವು? |
ರಸ, ರುಧಿರ, ಮಾಂಸ, ಮಜ್ಜೆ, ಮೆದಸ್ಸು, ಅಸ್ಥಿ, ಶುಕ್ಲ |
| ಸಮಗ್ರ ವಚನ ಸಂಪುಟ ಪ್ರಕಟಿಸಿದ ಮುಖ್ಯಮಂತ್ರಿ ಯಾರು? |
ಎಂ. ವೀರಪ್ಪ ಮೊಯಿಲಿ |