Previous ಶರಣ ಕ್ಷೇತ್ರಗಳು Lingayat Piligram Centers ಸೊಲ್ಲಾಪುರ Next

ಉಳವಿ

ಹನ್ನೆರಡನೆ ಶತಮಾನದಲ್ಲಿ ಕಲ್ಯಾಣದಲ್ಲಿ ಶರಣರು ಅಂತರ್ಜಾತಿ ಮದುವೆ ನಡೆಸಿದಾಗ ಕಲ್ಯಾಣ ಕ್ರಾಂತಿಯಾಗಿ ಬಸವಣ್ಣನವರು ಕೂಡಲ ಸಂಗಮಕ್ಕೆ ಹೋದರು. ಬಸವಣ್ಣನವರ ಅಳಿಯ ಚನ್ನಬಸವಣ್ಣ ,ಅಕ್ಕ ನಾಗಲಾಂಬಿಕೆ ಹಾಗೂ ಇತರ ಶರಣರ ದಂಡು ಕಟ್ಟಿಕೊಂಡು ಸುರಕ್ಷಿತ ಜಾಗ ಹುಡುಕಿ ಹೊರಟರು. ಶರಣರು ರಚಿಸಿದ ವಚನ ಸಾಹಿತ್ಯ ದ ಗಂಟುಗಳು ಈ ಶರಣರ ಹೆಗಲ ಮೇಲಿದ್ದವು. ಮುಂದಿನ ಪೀಳಿಗೆಗೆ ವಚನ ಸಾಹಿತ್ಯವನ್ನು ಸುರಕ್ಷಿತವಾಗಿ ತಲುಪಿಸುವ ಉದ್ದೇಶದಿಂದ ಹೊರಟ ಇವರು ತಲುಪಿದ್ದು ದೂರದ ಗೋವಾ ಬಳಿಯ ಕಾಡಿನ ಬೆಟ್ಟದ ಹತ್ತಿರ ಬಂದು ಉಳಿದು ಕೊಂಡರು. ಬಿಜ್ಜಳನ ಸೈನಿಕರ ಜೊತೆ ಹೊಡೆದಾಡುತ್ತಲೇ ಈ ಜಾಗಕ್ಕೆ ಅವರು ಬಂದು ಮುಟ್ಟಿದ್ದರು. ಅಲ್ಲೇ ಲಿಂಗೈಕ್ಯರಾದರು. ಅಲ್ಲಿಯೇ ಚನ್ನಬಸವಣ್ಣನವರ ಸಮಾಧಿ ಯನ್ನು ಕಟ್ಟಲಾಗಿದೆ. ಚನ್ನಬಸವಣ್ಣನ ತಾಯಿ ಮತ್ತು ಬಸವಣ್ಣನ ಸೋದರಿ ಅಕ್ಕ ನಾಗಲಾಂಬಿಕೆ ಹೆಸರಿನಲ್ಲಿರುವ ಗುಹೆಯು ಈ ಪವಿತ್ರ ಸಮಾಧಿಗೆ ಹತ್ತಿರದಲ್ಲಿ ಇದೆ. ಶರಣರು ಬಂದು "ಉಳಿ"ದುಕೊಂಡದ್ದರಿಂದ ಈ ಸ್ಥಳವು "ಉಳವಿ" ಅಂತ ಆಯಿತು ಈ ಕ್ಷೇತ್ರವು ಇಂದು ಪವಿತ್ರ ಯಾತ್ರಾ ಸ್ಥಳವಾಗಿದೆ. ಇಲ್ಲಿ ಪ್ರಖ್ಯಾತ ಚನ್ನಬಸವೇಶ್ವರ ದೇವಾಲಯವನ್ನು ನಿರ್ಮಿಸಿಲಾಗಿದೆ.

Haralayya Chilume, Ulavi, Karnataka

ಹರಳಯ್ಯನವರ ಚಿಲುಮೆ:

ಬಿಜ್ಜಳನು ಹರಳಯ್ಯನವರನ್ನು ಅನೆ ಕಾಲಿಗೆ ಕಟ್ಟಿ ಎಳೆಸಿದಾಗ ಅವರು ಲಿಂಗೈಕ್ಕ್ಯರಾಗುತ್ತಾರೆ . ನಂತರ ಬಿಜ್ಜಳನ ಸೈನ್ಯ ಮತ್ತು ಜಾತಿ ವಾದಿಗಳು ವಚನಗಳನ್ನು ನಾಶಪಡಿಸಲು ಮುಂದಾಗುತ್ತಾರೆ. ಶರಣರು ವಚನ ಸಾಹಿತ್ಯದ ರಕ್ಷಣೆಗಾಗಿ ಉಳವಿ ತಲುಪುತ್ತಾರೆ. ಅಲ್ಲಿರುವ ಒಂದು ಚಿಲುಮೆಗೆ ಹುತಾತ್ಮರಾದ ಹರಳಯ್ಯನವರ ಹೆಸರಿಡುತ್ತಾರೆ. ಆ ನೀರಿನ ಚಿಲುಮೆ ಇನ್ನು ಇದೆ, ಅದುವೇ ಹರಳಯ್ಯನವರ ಚಿಲುಮೆ.

veergallu, Ulavi, Karnataka

ವಚನ ಸಾಹಿತ್ಯದ ಉಳಿವಿಗೆ ಹೋರಾಡಿ ಮಾಡಿದವರ ನೆನಪಿಗಾಗಿ ಮಾಡಿದಂಥ ವೀರಗಲ್ಲು

ಕಲ್ಯಾಣದ ಕ್ರಾಂತಿ ಆದಾಗ ವಚನ ಸಾಹಿತ್ಯದ ಉಳಿವಿಗೆ ಹೋರಾಡಿ ಮಾಡಿದವರ ನೆನಪಿಗಾಗಿ ಮಾಡಿದಂಥ ವೀರಗಲ್ಲು. ಉಳವಿಯ ಬಸವಣ್ಣನ ಗುಡಿಯ ಮುಂಬಾಗ ಈ ವೀರಗಲ್ಲನ್ನು ಕಾಣಬಹುದು. ವಚನ ಕ್ರಾಂತಿಗೆ ಯುದ್ದದ ಮಾಹಿತಿಗೆ ಮುನ್ನುಡಿಗೆ ಪುಷ್ಟಿ ಮತ್ತು ಆಧಾರ ನೀಡುವಂತಹದು. ಗಮನಿಸಿ ಮೊದಲನೇ ಚಿತ್ರದಲ್ಲಿ ಅಕ್ಕ ನಾಗಮ್ಮ ಬಿಜ್ಜಳನ ಸೈನಿಕರ ಜೊತೆ ಅಕ್ಕ ನಾಗಲಾಂಬಿಕೆ ಮತ್ತು ಕೆಲವು ಶರಣರ ಕಾದಾಟದ ದೃಶ್ಯವನ್ನ ಕಾಣಬಹುದು, ಎರಡನೇ ಚಿತ್ರದಲ್ಲಿ ಯುದ್ದದಲ್ಲಿ ಮಡಿದು ವೀರಗತಿ ಪ್ರಾಪ್ತಿಹೊಂದಿದವರು, ಬಸವಣ್ಣನನ್ನು ಕೂಡುತ್ತಿರುವ ದೃಶ್ಯ, ಮದ್ಯ ಭಾಗದಲ್ಲಿ ಬಸವಣ್ಣ ಲಿಂಗವನ್ನು ಹಿಡಿದು ಪೂಜೆ ಮಾಡಿಕೊಳ್ಳುವ ದೃಶ್ಯವನ್ನ ಕಾಣಬಹುದು.

veergallu, Ulavi, Karnataka

ಉಳವಿ ಕಾರವಾರದಿಂದ ಸುಮಾರು ೭೫ ಕಿ.ಮೀ. ದೂರದಲ್ಲಿದೆ. ಹತ್ತಿರದ ಸ್ಥಳಗಳು: ದಾಂಡೇಲಿ, ಧಾರವಾಡ, ಹುಬ್ಬಳ್ಳಿ.

ಸಾರಿಗೆ: ಸ್ವಂತ ವಾಹನದಲ್ಲಿ ಪ್ರಯಾಣ ಮಾಡುವುದು ಉತ್ತಮ. ಹುಬ್ಬಳ್ಳಿ, ಚಿತ್ರದುರ್ಗ, ಹಾವೇರಿ ಮತ್ತು ಬೆಳಗಾವಿಯಿಂದ ಬಸ್ಸುಗಳಿವೆ.

ಸಿಂಥೇರಿ ಬಂಡೆ, ಕಾಳಿ ನದಿ, ಅಣಸಿ ಮೀಸಲು ಅರಣ್ಯ , ಸೂಪಾ ಅಣೆಕಟ್ಟು ಇಲ್ಲಿನ ಇತರ ನೋಡತಕ್ಕ ಸ್ಥಳಗಳು.

*
ಪರಿವಿಡಿ (index)
Previous ಶರಣ ಕ್ಷೇತ್ರಗಳು Lingayat Piligram Centers ಸೊಲ್ಲಾಪುರ Next